Saturday, April 25, 2020

ರಾಜೇಶ್ವರಿ. ಹುಲ್ಲೇನಹಳ್ಳಿ. ಕವನಗಳು

ಪ್ರಭಾವ

ಸಮಯವೇ ಇಲ್ಲವೆಂದು

ಸದಾ ಕೊರಗುತ್ತಿದ್ದ ಜನರಿಗೀಗ,

ಕಳೆಯಲಾಗುತ್ತಿಲ್ಲ ಸಮಯ

ಕೊರೊನಾ ನೀ ಬಂದಿರುವಾಗ!

ಸಾಕಿನ್ನು ಆಟ

ಹೇ ಕೊರೊನಾ ಇದೇ ನಿನ್ನ ಕೊಡುಗೇನಾ?

ಜೀವಗಳ ಕಬಳಿಸಿದೆ,ಅಹಮಿಕೆಯ ಕಳಚಿದೆ.

ಬಾಂಧವ್ಯಗಳ ಬೆಸೆದೆ, ಮನೆಯ ಮನೆಯಾಗಿಸಿದೆ.

ಸಾಕಿನ್ನು ನಿನಾ ಆಟ,ನೀ ಕಲಿಸಿದ ಪಾಠ!

ಹೇಳಿಬಿಡು ಬೇಗ ಟಾ ಟಾ.!

ಗುಮ್ಮ

ಹೇ ಕೊರೊನಾ ಏನೆಂದು ಕರೆಯಲಿ ನಾ ನಿನ್ನ?

ಅರೆಛಣದಿ ಮುಚ್ಚಿಬಿಟ್ಟೆಯಲ್ಲಾ

ಮದುವೆಯಾದಾಗಿನಿಂದ ಮುಚ್ಚಿಸಲಾಗದ

ನನ್ನವಳ ಈ ಬಾಯನ್ನ!

ಬಾಯಿಬೀಗ

ದೇವರಿಗೆ ಹರಕೆ ಹೊತ್ತು

ಹಾಕಿಸಿಕೊಳ್ಳುತ್ತಿದ್ದರು "ಬಾಯಿಬೀಗ"

ಜಾತ್ರೆ ಪರಿಷೆ ನಡೆಯುವಾಗ!

ಹಾಕಿಬಿಟ್ಟೆಯಾ ಕೊರೊನಾ ಸದ್ದಿಲ್ಲದೆ

ನೀನೀಗ ಎಲ್ಲರ ಬಾಯಿಗೆ ಬೀಗ!

ಕೊರೊನಾ

ಮನುಜನ ಅಹಮಿಗೆ,

ಇದ್ದಕ್ಕಿದ್ದಂತೆ ದೈವ ಕೊಟ್ಟ ಪೆಟ್ಟು.

ಗೋಜಲಿನ್ನೂ ಅದರ ಹುಟ್ಟಿನ ಗುಟ್ಟು!

ಛಣ ಛಣಕೂ ಏರುತಿದೆ ಸಹಸ್ರ ಪಟ್ಟು!


No comments:

Post a Comment