ಹೇಗಿದ್ದ ಕಾಲ ಹೇಗಾಯಿತು
ನನ್ನ ಮಗ ನನ್ನ ಅಳಿಯ ನನ್ನ ಮಗಳು ನನ್ನ ಸೊಸೆ ವಿದೇಶದಲ್ಲಿ ಇದ್ದಾರೆ ಎಂದು ಹೆಮ್ಮೆ ಪಡುತ್ತಿದ್ದ ನಮಗೆ ಇಂದು ವಿದೇಶ ದ ಹೆಸರು ಕೇಳಿದರೆ ಹೆದರಿಕೊಳ್ಳುವ ಪರಿಸ್ಥಿತಿ . ಗೆಳೆಯ ವಿದೇಶದಿಂದ ಬರುತ್ತಿದ್ದಾನೆ ಎಂದು ತಿಳಿದ ತಕ್ಷಣ ಪಾರ್ಟಿ ಬುಕ್ ಮಾಡುತ್ತಿದ್ದವರು, ಗೆಳೆಯರನ್ನು ಕರೆದುಕೊಂಡು ಬರಲು ಏರ್ ಫೇೂರ್ಟಿ ಗೆ ಕಾರು ಹಿಡಿದು ಕೊಂಡು ಹೊಗುತ್ತಿದ್ದವರು ಈಗ ಗೆಳೆಯ ವಿದೇಶದಿಂದ ಬರುತ್ತಿದ್ದಾನೆ ಎಂದು ತಿಳಿದ ತಕ್ಷಣವೇ ಫೇೂನ್ ಸ್ವಿಚ್ ಆಫ್ ಮಾಡಿಕೊಳ್ಳುವ ಪರಿಸ್ಥಿತಿ .ಪರ ಊರಿನಿಂದ ಸಂಬಂಧಿಕರು ಬರುವ ಸುದ್ದಿ ತಿಳಿದಾಗ ಸಂಭ್ರಮಿಸುತ್ತಿದ್ದ ನಮಗೆ ಇಂದು ಯಾಕಾಪ್ಪ ಬರುತ್ತಾರೆ ಎನ್ನುವ ಪರಿಸ್ಥಿತಿ . ಪಕ್ಕದ ಮನೆಯ ಹುಡುಗ ವಿದೇಶ ದಿಂದ ಬರುತ್ತಿದ್ದಾನೆ ಎಂದಾಗ ಕಾತರದಿಂದ ಕಾಯುತ್ತಿದ್ದ ಆಚೆ ಈಚೆ ಮನೆಯವರು ಈಗ ಬರುವ ಸುದ್ದಿ ತಿಳಿದಾಗ ತಮ್ಮಮನೆಗೆ ಮಾತನಾಡಿಸಲು ಬರುತ್ತಾನೆ ಎಂದು ತಮ್ಮಮನೆಯ ಬಾಗಿಲನ್ನು ಮುಚ್ಚಿಕೊಳ್ಳುವ ಪರಿಸ್ಥಿತಿ. ಮೈತುಂಬ ಮುಚ್ಚಿ ಕೊಳ್ಳಲು ಬಟ್ಟೆ ಇದ್ದರೂ ವಿದೇಶಿ ಫ್ಯಾಷನ್ ಗೆ ಮರುಳಾಗಿ ಅರೆ ಬರೆ ಬಟ್ಟೆ ಧರಿಸುತ್ತಿದ್ದವರು ಈಗ ಬಾಯಿಯನ್ನು ಸಹ ಬಿಡದೆ ಮುಚ್ಚಿ ಕೊಳ್ಳುವ ಪರಿಸ್ಥಿತಿ. ಯಾವುದೇ ಕೆಲಸ ವಿಲ್ಲದಿದ್ದರು ಒಂದು ಕ್ಷಣವೂ ಮನೆಯಲ್ಲಿ ಕುಳಿತು ಹಿರಿಯರೊಂದಿಗೆ ಮಾತನಾಡುವ ವ್ಯವದಾನವಿಲ್ಲದವರು ಮನೆಯಲ್ಲಿಯೇ ಇರಬೇಕಾದ ಅನಿವಾರ್ಯತೆ. ಮನೆಯ ತಿಂಡಿ ತಿನಿಸುಗಳು ಬಾಯಿಗೆ ರುಚಿಸದೆ ಬಗೆ ಬಗೆಯ ತಿಂಡಿಗಾಗಿ ಆನ್ ಲೈನ್ ನಲ್ಲಿ ಬುಕ್ ಮಾಡುತ್ತಿದ್ದವರು ಗಂಜಿ ಸಿಕ್ಕಿದರು ಸಾಕಪ್ಪ ಎನ್ನುವ ಪರಿಸ್ಥಿತಿ. ಕಂತೆ ಕಂತೆ ಗರಿಗರಿ ನೇೂಟು ಹಿಡಿದು ಬರಬರನೆ ಎಣಿಸುತ್ತಿದ್ದವರು ಕರೆಸ್ಸಿ ನೇೂಟನ್ನು ಮುಟ್ಟಲು ಭಯಪಡುವ ಪರಿಸ್ಥಿತಿ. ಯಾವುದೇ ಪರಿಸರ ಪ್ರೇಮಿಗಳ ಹೇೂರಾಟಕ್ಕೆ ಮಣಿಯದೆ ಹಗಲಿರುಳೆಂನದೆ ಹೊಗೆಯುಗುಳುತ್ತಿದ್ದ ಕಾರ್ಖಾನೆಗಳು ಮೌನಕ್ಕೆ ಶರಣಾಗಬೇಕಾದ ಪರಿಸ್ಥಿತಿ. ಗಿಜಿ ಗಿಜಿ ಗುಟ್ಟುತ್ತಿದ್ದ ಪಟ್ಟಣಗಳು ಹೆದ್ದಾರಿಗಳು ಬಿಕೇೂ ಎನ್ನುವ ಪರಿಸ್ಥಿತಿ. ಊರಿನಲ್ಲಿ ಬೇಕಾದಷ್ಟು ಹೊಲ ಗದ್ದೆಗಳಿದ್ದರು ಅದೆಲ್ಲವನ್ನು ಬಿಟ್ಟು ಪೇಟೆ ಪಟ್ಟಣಗಳಲ್ಲಿ ದೊಡ್ಡ ದೊಡ್ಡ ಬಂಗಲೆ ಕಟ್ಟಿಕೊಂಡವರು ಹಡಿಲು ಬಿದ್ದ ಗದ್ದೆ ಕಡೆಗೆ ಮುಖ ಮಾಡ ಬೇಕಾದ ಪರಿಸ್ಥಿತಿ. ತಂದೆ ತಾಯಿಯರನ್ನು ಅನಾಥಶ್ರಮದಲ್ಲಿ ಬಿಟ್ಟು ಕೊನೆಗೆ ಅವರ ಶವಸಂಸ್ಕಾರಕ್ಕು ಬರಲು ಬಿಡುವಿಲ್ಲದವರು ತಮ್ಮ ಹುಟ್ಟೂರಿಗೆ ಬರಲು ಹರಸಾಹಸ ಪಡುವ ಪರಿಸ್ಥಿತಿ. ಹತ್ತಾರು ವರುಷ ಊರಕಡೆ ಮುಖಮಾಡದವರು ಊರಿಗೆ ಓಡೊಡಿ ಬರುವ ಪರಿಸ್ಥಿತಿ. ಹಳ್ಳಿ ಜೀವನ ಎಂದರೆ ಮೂಗು ಮುರಿಯುತ್ತಿದ್ದವರು ಜೀವ ಭಯದಿಂದ ಹಳ್ಳಿಗೆ ಧಾವಿಸುವ ಪರಿಸ್ಥಿತಿ ಹೇಗಿದ್ದ ಕಾಲ ಹೇಗಾಯಿತು.
ನಮ್ಮ ಆದಿಮಾನವರು ಕಾಡುಮೇಡು ಅಲೆದಾಡಿ ಗಡ್ಡೆ ಗೆಣಸುಗಳನ್ನು ತಿನ್ನುತ್ತಿದ್ದರು ಎಂಬುದನ್ನು ಇತಿಹಾಸದಲ್ಲಿ ಓದಿದ ನೆನಪು, ಮುಂದೆ ನಮಗು ಆ ಕಾಲ ಬಂದರೆ ಆಶ್ಚರ್ಯ ಪಡಬೇಕಾಗಿಲ್ಲ. ಹೇಗಿದ್ದ ಕಾಲ ಹೇಗಾಯಿತು .ಇದಕ್ಕೆ ನಾವು ಕೊಡುವ ಕಾರಣ ಪ್ರಕೃತಿಯ ಮುನಿಸು. ಇದು ಪ್ರಕೃತಿಯ ಮುನಿಸಲ್ಲ ಮಾನವನ ಸ್ವಾರ್ಥ ಹಾಗು ಅತಿಯಾಸೆಯ ಪರಮಾವಧಿ. ಇದಕ್ಕೆ ಪರಿಹಾರ ಪರಮಾತ್ಮ ನೀಡಿವುದಿಲ್ಲ ಮಾನವನೆ ಕಂಡುಕೊಳ್ಳಬೇಕು. ಕಾಲ ಬದಲಾಗಿಲ್ಲ ಬದಲಾದ ನಾವು ಬದಲಾಗಬೇಕು. ಇನ್ನಾದರು ಸ್ವಾರ್ಥ ಅಸೂಯೆ ದುರಾಸೆಗಳನ್ನು ಬಿಟ್ಟು ನಿಜಮಾನವರಾಗಿ ಬದುಕಲು ಕಲಿಯೇೂಣ. ನಮ್ಮ ಮಣ್ಣಿನ ಸಂಸ್ಕಾರ ಸಂಸ್ಕೃತಿಗಳನ್ನು ಗೌರವಿಸೇೂಣ, ಪಾಲಿಸೇೂಣ.
--✍️ ಭಾಪೂ (ವ್ಯಾಟ್ಸಾಪ್ ಕೃಪೆ)
No comments:
Post a Comment