ಗೆದ್ದೇ ಗೆಲುವೆವು
ಮನೆಯಲಿರು ಮನೆಯಲಿರುಭಾರತೀಯ
ನೀ ಮನೆಯಲ್ಲಿದ್ದರೆ ಜೀವ
ಉಳಿಸುತೀಯ......
ನೆರೆಯ ರಾಷ್ಟ್ರದಿಂದ ಬಂದ
ದುರುಳನೊಬ್ಬ
ಸಮಾಧಿಯನ್ನು ಕಟ್ಟುವುದೇ
ಅವನಿಗೆ ಹಬ್ಬ
ದೇಶ,ಭಾಷೆ,ಒಳಿತು,ಕೆಡುಕು
ಎಣಿಸಲಾರನು
ಹೆಣ್ಣು-ಗಂಡು, ಪ್ರಾಣಿ-ಪಕ್ಷಿ
ಸಹಿಸಲಾರನು......
ನುಸುಳಿ ಬಂದ ಮರೆಮಾಚುತ
ಚೀನಾದಿಂದ
ವಿಶ್ವಕೆಲ್ಲ ಚಾಚಿ ಹಸ್ತವ ಅಪ್ಪುಗೆಯಿಂದ
ಮಾಮಳ್ಳಿಯ ಬೆಲೆಗೆ ಬಿದ್ದರು
ಜೋರಿನಿಂದ
ಬೀಳದವರ ಪ್ರಾಣವಿಹುದು
ಜತನದಿಂದ......
ಹೋಗದಿರಿ ಹೊರಗೆ ನೀವು
ಹೊಕ್ಕಿಬಿಡುವನು
ಯಮನೆ ಮರಣ ಹೋಮ ಕಂಡು ದಂಗಾಗಿಹನು
ನಮ್ಮ ಜೀವ ನಮ್ಮ ಕೈಲೇ
ಅಂತರವಿರಲಿ
ರಕ್ಷಿಪ ನಮ್ಮೆಲ್ಲ ಜನಕೆ
ಧನ್ಯತೆಯ ಹೇಳಿರಿ......
ಶಾಂತಿ ಸಹನೆ ಪಾಲಿಸೋಣ
ಇಂಥಾ ಸಮಯದಿ
ಹಳೆಯ ಸದ್ಭಾವನೆಗಳ
ತರುವ ಜಾರಿಲಿ
ಕರೋನ ದುಷ್ಟನನ್ನು ಬಡಿದು
ಗೆದ್ದೇ ಗೆಲುವೆವು
ವಿಶ್ವಕೆಲ್ಲ ಮಾದರಿ ನಾವು
ಎಂದೇ ನಿಲುವೆವು......
--ಸಿ.ಎ.ಇಂದಿರಾ, ತುಮಕೂರು. (ಕೃಪೆ ವ್ಯಾಟ್ಸಾಪ್ )
No comments:
Post a Comment