Tuesday, April 21, 2020

ಕೋಟಿ ಕೋಟಿ ರೋಗಾಣುಗಳ ನಯವಂಚಕತೆಯಿಂದ

ಕೋಟಿ ಕೋಟಿ

ರೋಗಾಣುಗಳ

ನಯವಂಚಕತೆಯಿಂದ



ಕೋಟಿ ಜನ

ರೋಸಿ ಹೋಗಿ

ನಲುಗು ತಿಹರು



ಕೋರಿಕೆಗೂ ಬಗ್ಗದ ಜನ

ರೋಡಿನಲ್ಲಿ ಬಿದ್ದು

ನಶಿಸಿಹೋಗುತಿಹರು



ಕೊರೋನ

ರೋಷಾವೇಷ

ನಂಬದ ರೀತಿ ಹೊಕ್ಕಿದೆ



ಕೊರೋನ

ರೋಗದಿಂದ ಮುಕ್ತಿಗೆ

ನಡು ಬೀದಿಗೆ ಬರಬಾರದು



ಕೊಬ್ಬು ಬಿಟ್ಟು

ರೋಗ ಕಂಜಿ ಮನೆಯಲ್ಲಿದ್ದರೆ

ನಮ್ಮ ನಾವು ಉಳಿಸಬಹುದು



ಕೊರೋನ

ರೋಗದಿಂದ

ನಾವು ಮುಕ್ತ ಮುಕ್ತ ಎಂದು

ಸಾರಬಹುದು.



ಆಗಬಹುದು ಎಲ್ಲರೂ ಒಮ್ಮೆ

ಶಿಸ್ತಿನ ಸಿಪಾಯಿ

ತೋರಬಹುದು ಸರ್ವೇಜನ ಸುಖಿನೋ ಭವ

ಭಾರತವು ಎಂದು. 

--ಕೆ.ಸಿ. ಗೀತ

No comments:

Post a Comment