Saturday, March 21, 2020

ಕರೋನಾ ಯುದ್ದ ಸಾರಿದೆ ನನಗೂ ಸಿಪಾಯಿ ಆಗುವ ಭಾಗ್ಯಒದಗಿದೆ

ಕರೋನಾ ಯುದ್ದ ಸಾರಿದೆ

ನನಗೂ ಸಿಪಾಯಿ ಆಗುವ ಭಾಗ್ಯಒದಗಿದೆ

ಇದು ಕರೋನಾ ವಿರುದ್ದ ಜಾಗೃತಿ ಸಾರುವ ಘೋಷವಾಕ್ಯ ನಿವೂ ಈ ಜಾಗೃತಿಯ ಭಾಗಿಗಳಾಗಿ ನಿಮ್ಮ ಮನದಾಳದಲ್ಲಿ ಪುಟಿಯುವ ಇಂತಹ ಜಾಗೃತಿ ಕವನಗಳನ್ನು ಈ ಬ್ಲಾಗ್‌ನಲಲ್ಲಿ ಹಂಚಿಕೊಳ್ಳಿ ಇದು ಕರೋನಾ ಹಿಮ್ಮೆಟ್ಟಿಸಲು ಸಹಕಾರಿ. ಇವುಗಳನ್ನ ಲೈಕ್‌ಗಾಗಿ ಹಂಚಿಕೊಳ್ಳಿ ಅತಿ ಹೆಚ್ಚು ಲೈಕ್ ಬಂದ ಕವನಗಳ ಪ್ರಕಟಿಸಿ ಕರೋನಾ ವಿಜಯ ದಿವಸ ಆಚರಣೆಯಲ್ಲಿ ಅನಾವರಣಗೊಳಿಸೋಣ.

ಜೈಹಿಂದ್ 
ಜೈಕರ್ನಾಟಕ

ಸೂಚನೆ : ಆಸಕ್ತರು ತಮ್ಮ ಲೇಖನ, ಕಾವ್ಯಗಳನ್ನು ಪ್ರಕಟಿಸಲು ಇ-ಮೇಲ್ ವಿಳಾಸಕ್ಕೆ ಕಳುಹಿಸಿ. prabhatservices.smg@gmail.com


ಕರೋನಾ ಯುದ್ದ ಸಾರಿದೆ
ನನಗೂ ಸಿಪಾಯಿ ಆಗುವ ಭಾಗ್ಯಒದಗಿದೆ

ದೇಶ ದೇಶಗಳ ಯುದ್ದಕ್ಕಿಂತ ದೊಡ್ಡಯುದ್ದ
ಮನುಕುಲದ ಅಳಿವು ಉಳಿವಿನ ಯುದ್ದ
ನಮ್ಮನ್ನೇ ಅಸ್ತ್ರವನ್ನಾಗಿಸಿ ನಮ್ಮವರ ವಿರುದ್ದವೇ ಎತ್ತಿಕಟ್ಟುವ,
ಕರೋನಾ ಯುದ್ದಸಾರಿದೆ ನಮ್ಮ ನಿಮ್ಮೆಲ್ಲರ ವಿರುದ್ದ

ನಾನು ಕರೋನಾ ಅಸ್ತ್ರವಾಗದೆ
ಶಿಸ್ತಿನ ಸಿಪಾಯಿಯಾಗಿ ಯುದ್ದ ಮಾಡುತ್ತೇನೆನ್ನುವ
ಕಂಕಣ ಬದ್ಧ ಸಿಪಾಯಿಗಳು ಬೇಕಿದ್ದಾರೆ
ನಾನೂ ಆಗುತ್ತೇನೆ ಅಂತಹ ಮಹಾನ್ ಸಿಪಾಯಿ.

ಯುದ್ದಕ್ಕೆ ಸಿಪಾಯಿಗಳ ಕೊರತೆಯಿದೆ
ದೇಶ ಕರೆಕೊಟ್ಟಿದೆ ಎಲ್ಲರೂ ಸಿಪಾಯಿಗಳಾಗಿರೆಂದು
ಬನ್ನಿ ನನ್ನೋಡನೆ ನೀವೂ ಸಿಪಾಯಿಗಳಾಗಿ
ಸಕಲ ಸನ್ನದ್ಧರಾಗಿ ಸ್ವಚ್ಚತೆಯ ಹರಿಕಾರರಾಗಿ

ಈ ಯುದ್ದಕ್ಕೆ ನಾನೂ ಒಬ್ಬಸಿಪಾಯಿ
ನನ್ನೋಡನೆ ಸೇರ ಬನ್ನಿ ಕರೋನಾ ಹೊರಾಟಪಡೆಗೆ
ಹೆಡೆಮುರಿ ಕಟ್ಟೋಣ ಕರೋನಾ-19 ಪಡೆ
ಆಚರಿಸೋಣ ಕರೋನಾ ವಿಜಯದಿನ, ದೇಶ ಹೆಮ್ಮೆ ಪಡುವಂತೆ.

--ಶಶಿಧರ ಕೆ. ಸಿ.

41 comments:

  1. ಯೋಚನೆ ಬಹಳ ಚೆನ್ನಾಗಿದೆ, ಕರೋನ ವಿರುದ್ಧ ಎಲ್ಲರ ಹೋರಟ ಅತ್ಯಗತ್ಯ

    ReplyDelete
  2. 'ನಮ್ಮನ್ನೇ ಅಸ್ತ್ರವನ್ನಾಗಿಸಿ ನಮ್ಮವರ ವಿರುದ್ದವೇ ಎತ್ತಿಕಟ್ಟುವ,
    ಕರೋನಾ ಯುದ್ದಸಾರಿದೆ ನಮ್ಮ ನಿಮ್ಮೆಲ್ಲರ ವಿರುದ್ಧ'
    ಈ ಸಾಲುಗಳು ತುಂಬಾ ಚೆನ್ನಾಗಿವೆ ಅಂದಹಾಗೆ, ಈ ಬ್ಲಾಗ್ ನ ಹೆಸರು ನನಗೆ ತುಂಬಾ ಇಷ್ಟವಾಯ್ತು.

    ReplyDelete
  3. ಕರೋನಾ ಕಂಡು ಕೇಳರಿಯದ ಮಹಾಮಾರಿ, ತಡೆಗಟ್ಟುವ ಸಿಪಾಯಿ ಆಗಬೇಕಿದೆ ನಾವೆಲ್ಲರೂ....

    ReplyDelete
  4. One disease may bring unity among Hundreds and hundreds of Indians, yes, it has .! Best wishes for the meaningful Blog.

    ReplyDelete
  5. ಕರೋನ ...

    ಹಿಗ್ಗಿ ಹಿರಿಯುತ್ತಿದ್ದ ಮನುಷ್ಯನ ಅಹಂಕಾರವನ್ನ.
    ಉಸಿರುಗಟ್ಟಿಸಿ.. ಹೆಡೆಮುರಿ ಕಟ್ಟಿದೆ ಕರೋನಾ..
    ಜಗದಗಲ ಚಾಚಿ , ವಿಜೃಂಭಿಸುತ್ತಿದೆ ತನ್ನ ಕಬಂಧ ಬಾಹು ವನ್ನ ...
    ತನ್ನೆದುರು ಮಂಡಿಯೂರಿಸಿದೇ ಇಡೀ ಭೂ ಮಂಡಲವನ್ನ..
    ಸಾವಿಲ್ಲದ ಅಸುರನಂತೆ ಧರೆಯಲ್ಲಿ ಮೆರೆಯುತ್ತಿದೆ ಕರೋನ ..
    ಬನ್ನಿ ಇದರ ಸಂಹಾರಕ್ಕೆ ನಾವೆಲ್ಲಾ ಕಂಕಣ ಬದ್ಧರಾಗಿ ಹೊರಡೋಣ..

    ಕೈ ಕುಲುಕದೆ ಕೈ ಮುಗಿಯೋಣ..
    ವ್ಯರ್ಥ ಪ್ರಯಾಣ ಮಾಡದಿರೋಣ..
    ಅಸಡ್ಡೆ ಮಾತುಗಳಿಗಾಗಿ ಗುಂಪು ಗುಂಪಾಗಿ ನಿಲ್ಲದಿರೋಣ..
    ಕರವಸ್ತ್ರ ಮುಕಗವಿಸು ಉಪಯೋಗಿಸಿ ,,ಜೀವನದ ಸರ್ವಸ್ವ ಕಾಪಡೋಣ...
    ಸ್ವಚ್ಚ ಶುಭ್ರ ಜೀವನ ನಮ್ಮದಾಗಿಸಿ ಕೊಳ್ಳೋಣ...

    ನಮ್ಮ ಸಂಸ್ಕೃತಿ ಪಾಲಿಸೋಣ ...

    ನಮ್ಮ ನಮ್ಮ ಮನೆಯಲ್ಲಿ ದ್ದೇ....ನಾವು ಹೊರಡೋಣ
    ಅವರಿಂದ ಇವರಿಂದ ಎನ್ನದೆ ನನ್ನಿಂದ ಇತರರಿಗೆ ಹರಡದೆ ಮಾದರಿಯಾಗೋಣ ...
    ಕರೋನ ವಿರುದ್ಧ ದ ಯುದ್ಧದಲ್ಲಿ ..ನಾವು ಶಾಂತ ಸಿಪಾಯಿಗಳಾಗೋಣ..

    ......ಸಂತು S ಕೊಟಗಿ



    ReplyDelete
    Replies
    1. ಅದ್ಬುತ ವಿಚಾರಗಳು ಸರ್ ಕಲಿಗಳಾಗಬೇಕಿದೆ ರೋಗದ ವಿರುದ್ಧ ಸೆಣಸಾಡಲು ಮುಂಜಾಗ್ರತೆ ಹಾಗೂ ಶುಚಿತ್ವವೇ ನಮ್ಮ ಅಸ್ರಗಳು

      Delete
    2. ಅದ್ಭುತ ವಿಚಾರಗಳು ಸರ್ ಕವಿಗಳಾಗಿ ಬೇಕಿದೆ ರೋಗದ ವಿರುದ್ಧ ಸೆಣಸಾಡಲು ಮುಂಜಾಗ್ರತೆ ಹಾಗೂ ಶುಚಿತ್ವವೇ ನಮ್ಮಯ ಅಸ್ತ್ರಗಳು

      Delete
    3. ನಿಮ್ಮ ಕವನವನ್ನು ಇದೇ ತಂತ್ರಜಾಲದಲ್ಲಿ ಪ್ರಕಟಿಸಿದ್ದೇವೆ.

      Delete
    4. https://kannada.goodu.in/2020/03/blog-post_23.html

      Delete
  6. ಕವನ ಸಮಯೋಚಿತವಾಗಿದೆ. ಕೊವಿಡ್-೧೯ರ ವಿರುದ್ಧದ ಹೋರಾಟಕ್ಕೆ ಎಲ್ಲರ‌ ಸಹಕಾರ ಅಗತ್ಯವೆಂಬುದು ಚೆನ್ನಾಗಿ ಮೂಡಿ ಬಂದಿದೆ. ಅಭಿನಂದನೆಗಳು

    ReplyDelete
  7. ಅಂದು ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮ ಗಾಂಧೀಜಿ ಹೇಳಿದರು "ಕರೋನಾ ಯಾ ಮರೋನಾ"
    ವಿದಿಯಾಟ!ಇಂದು ನಾವು ಹೇಳಬೇಕಾಗಿದೆ 'ಕರೋನಾ ಇಂದ ಮರಣ'
    "ಗೋ ಕರೋನಾ ಗೋ" ಎಂದರೆ ಕರೋನಾ ಹೋಗುತ್ತಾ?
    ದೇವರೇ ಈ ಮಹಾಮಾರಿಯಿಂದ ನಮ್ಮನ್ನು ರಕ್ಷಿಸು ಎನ್ನುವುದು ನಿಮ್ಮ ಭಕ್ತಿ,ನಂಬಿಕೆಯಾದರೆ ಅದು ಕೂಡಾ ಅವರ ನಂಬಿಕೆಯಲ್ಲವೇ?
    ಕಲಿಯುಗದಲ್ಲಿ ವಿಷ್ಣುವಿನ ಇನ್ನೋಂದು ಮುಖ ನೋಡುವ ಕಾಲ ಬಂದಿದೆ
    ಆದರೆ ನಮ್ಮವರ ಮರಣಮೃದಂಗ ನೋಡಲಾಗುತ್ತಿಲ್ಲ ಎನಗೆ
    ಮಾಡಬೇಕಾಗಿದೆ ವ್ಯಯಕ್ತಿಕ ಹೋರಾಟ ನಮಗಾಗಿ
    ಮನುಕುಲದ ಪರಿಸರ ನಾಶವನ್ನು ನೋಡಲಾಗದೇ
    ದೇವರೇ ಕಳಿಸಿದಂತಿದೆ ಈ ಕರೋನಾ
    ಹೋರಾಡಬೇಕಾಗಿದೇ ಮನುಕುಲದ ಉಳಿವಿಗಾಗಿ
    ಮಹಾಮಾರಿಯ ಅಳಿವಿಗಾಗಿಅಳಿವಿಗಾಗಿ
    ಶಿಸ್ತಿನ ಸಿಪಾಯಿಗಳಾಗಿ ಕರೋನಾವನ್ನು ಹಿಮ್ಮೆಟ್ಟಿಸೋಣ
    ಒಂದಾಗಿ ನನ್ನೊಂದಿಗೆ ನಿಮ್ಮ ರಕ್ಷಣೆಗಾಗಿ

    ReplyDelete
    Replies
    1. ನಿಮ್ಮ ಕವನವನ್ನು ಇದೇ ತಂತ್ರಜಾಲದಲ್ಲಿ ಪ್ರಕಟಿಸಿದ್ದೇವೆ.
      https://kannada.goodu.in/2020/03/blog-post_65.html

      Delete
    2. ನಿಮ್ಮ ಕವನವನ್ನು ಇದೇ ತಂತ್ರಜಾಲದಲ್ಲಿ ಪ್ರಕಟಿಸಿದ್ದೇವೆ.
      ಕರೋನಾ ಯಾ ಮರೋನಾ

      Delete
  8. ಇಳೆಯ ಮಕ್ಕಳೆಲ್ಲ ಹೊರಡಿ
    ಹಳೆಯ ಶಸ್ರ್ತವನ್ನು ಹಿಡಿದು
    ಕರೋನ ರಕ್ಕಸನ ಹೂಂಕಾರ ಹೊಸಕಿ ಹಾಕುವ

    ಯೋಧರೇ ಕೈಯ ಕುಲುಕಬೇಡಿ ನೀವು
    ಕೈಯ ಮುಗಿದು ನಗುವ ಸೂಸಿ
    ಇದುವೆ ಹಳೆಯ ಅಸ್ತ್ರ ನಮಗೆ ಯುದ್ಧ ಗೆಲ್ಲಲು


    ಅಲ್ಲಿ ಇಲ್ಲಿ ಮುಟ್ಟಿಕೊಂಡು ಕ್ರಿಮಿಗಳನ್ನು ಬೆಳೆಸಬೇಡಿ
    ಸಿಕ್ಕ ಸಿಕ್ಕ ಕಡೆಗಳಲ್ಲಿ ಅಲೆದು ತಿರುಗಿ ಸೊರಗಬೇಡಿ
    ಮನೆಯೊಳಗೆ ಇದ್ದುಕೊಂಡು ಶಕ್ತಿ ಬೆಸೆಯುವ

    ಕೈಯ ಶುಭ್ರ ತೊಳೆದುಕೊಂಡು
    ಬಟ್ಟೆ ಬರೆಯ ಬಿಸಿಲಿಗಿಟ್ಟು
    ಮೈಯ ತುಂಬ ಸ್ವಚ್ಛ ಶುದ್ಧ ಯುದ್ಧ ಜಯಿಸಲು

    ಅನ್ನ ಹಾಲು ನೀರು ಸಾರು
    ಏನ ತಿನ್ನು ಏನೊ ಕುಡಿಯೊ
    ಕೈಯು ಸ್ವಚ್ಛ ಶುಭ್ರವಿರಲಿ ಯುದ್ಧ ಗೆಲ್ಲಲು

    ಮನಸು ತುಂಬ ಜಯದ ತುಮುಲ
    ಉಳಿದ ವಿಷಯ ಮಾರುದೂರ
    ಜಯದ ಕೇಕೆ ಮುಗಿಲ ಬಗೆದು ನಭವ ಮುಟ್ಟಲಿ




    ReplyDelete
    Replies
    1. ನಿಮ್ಮ ಕವನವನ್ನು ಇದೇ ತಂತ್ರಜಾಲದಲ್ಲಿ ಪ್ರಕಟಿಸಿದ್ದೇವೆ.
      https://kannada.goodu.in/2020/03/blog-post_24.html

      Delete
    2. ನಿಮ್ಮ ಕವನವನ್ನು ಇದೇ ತಂತ್ರಜಾಲದಲ್ಲಿ ಪ್ರಕಟಿಸಿದ್ದೇವೆ. ಇಳೆಯ ಮಕ್ಕಳೆಲ್ಲ ಹೊರಡಿ

      Delete
  9. Yes it's really need to be a soldier for ourselves.we all with u Sir🙏🙏

    ReplyDelete
  10. "ಕರೋನ ವಿರುದ್ಧ ಯುದ್ಧಕ್ಕೆ ಪ್ರತಿ ಮಹಿಳೆಯೊ ವೀರ ವನಿತೆಯಾಗಬೇಕಿದೆ
    ತಾಳ್ಮೆಯ ಜೊತೆಗೆ ಸ್ವಚ್ಛತೆಯ ಅಸ್ತ್ರ ಹೊಂದಬೇಕಿದೆ,
    ಲಭ್ಯ ಪದಾರ್ಥಗಳನ್ನು ಬಳಸಿ ಜಾಣ್ಮೆಯ ಅಡುಗೆ ಮಾಡಬೇಕಿದೆ,
    ಮನೆಯವರೆಲ್ಲರ ಸ್ವಾಸ್ಥ್ಯ ಹೊಣೆ ಹೊರಬೇಕಿದೆ,
    ಪ್ರತಿ ಮನೆಯ ಮಹಿಳೆಯರು ಕಂಕಣಬದ್ಧರಾಗಬೇಕಿದೆ
    ಸ್ತ್ರೀ ಶಕ್ತಿಯಿಂದ, ಕರೋನದ ಹುಟ್ಟಡಗಿಸಬೇಕಿದೆ
    ದೇಶದಿಂದ ಮಹಾಮಾರಿಯ ಹೊರದೊಡಬೇಕಿದೆ

    ReplyDelete
  11. ಕರೋನಾ ವಿಜಯ ದಿವಸ ಆಚರಣೆ

    ….…..........

    130 ಕೋಟಿ ಜನರೂ ಕರೋನ ಸಿಪಾಯಿ ಆದಾಗ

    Thank you shashidhar

    ReplyDelete
  12. ಕೊರೋನ

    ಒಬ್ಬರಿಂದ

    ಒಬ್ಬರಿಗೆ

    ಹರಡದಿರೋಣ.

    ಕುವೆಂಪು

    ನುಡಿ

    ನೆನೆಯೋಣ.

    ಅಲ್ಪ ಮಾನವ ನಾಗದೆ

    ವಿಶ್ವ ಮಾನವರಾಗೋಣ

    ReplyDelete
  13. ಯಾರಿಗೂ ಹೇಳೋಣು ಬ್ಯಾಡ ಯಾರಿಗೂ ಅನ್ಬೇಡಿ.

    ಕೊರೋನ ಇದ್ರೆ ಬಾಯ್ ಬಿಡಿ.

    ದೇವರಾಗಿ ಡಾಕ್ಟರ್ ಇದ್ದಾರೆ.

    ಬದುಕು ಬಂಗಾರ ಮಾಡ್ತಾರೆ.

    ReplyDelete
  14. ಮಾನವ ಜನ್ಮ ದೊಡ್ಡದು

    ಇದ ಹಾಳುಮಾಡಿಕೊಳ್ಳಬೇಡಿ

    ಹುಚ್ಚಪ್ಪಗಳಿರಾ. ಎನ್ನುವ

    ದಾಸಶ್ರೇಷ್ಠರ ನುಡಿ ನೆನಪಿಸಿಕೊಳ್ಳೋಣ



    ಮರುಜನ್ಮ ನೋಡಿರೋರು ಯಾರು?

    ಕೊರೋನ ಮಹಾಮಾರಿಗೆ

    ಬಲಿಯಾಗದೆ ಇರೋಣ ಅದಕ್ಕೆ

    ಹೇಳಿದಷ್ಟು ದಿನ ಮನೆಯಲ್ಲಿ ಕೂರೋಣ



    ReplyDelete
  15. ಕೋಟಿ ಕೋಟಿ

    ರೋಗಾಣುಗಳ

    ನಯವಂಚಕತೆಯಿಂದ



    ಕೋಟಿ ಜನ

    ರೋಸಿ ಹೋಗಿ

    ನಲುಗು ತಿಹರು



    ಕೋರಿಕೆಗೂ ಬಗ್ಗದ ಜನ

    ರೋಡಿನಲ್ಲಿ ಬಿದ್ದು

    ನಶಿಸಿಹೋಗುತಿಹರು



    ಕೊರೋನ

    ರೋಷಾವೇಷ

    ನಂಬದ ರೀತಿ ಹೊಕ್ಕಿದೆ



    ಕೊರೋನ

    ರೋಗದಿಂದ ಮುಕ್ತಿಗೆ

    ನಡು ಬೀದಿಗೆ ಬರಬಾರದು



    ಕೊಬ್ಬು ಬಿಟ್ಟು

    ರೋಗ ಕಂಜಿ ಮನೆಯಲ್ಲಿದ್ದರೆ

    ನಮ್ಮ ನಾವು ಉಳಿಸಬಹುದು



    ಕೊರೋನ

    ರೋಗದಿಂದ

    ನಾವು ಮುಕ್ತ ಮುಕ್ತ ಎಂದು

    ಸಾರಬಹುದು.



    ಆಗಬಹುದು ಎಲ್ಲರೂ ಒಮ್ಮೆ

    ಶಿಸ್ತಿನ ಸಿಪಾಯಿ

    ತೋರಬಹುದು ಸರ್ವೇಜನ ಸುಖಿನೋ ಭವ

    ಭಾರತವು ಎಂದು.

    ReplyDelete
  16. ಕೋಟಿ ಕೋಟಿ

    ರೋಗಾಣುಗಳ

    ನಯವಂಚಕತೆಯಿಂದ



    ಕೋಟಿ ಜನ

    ರೋಸಿ ಹೋಗಿ

    ನಲುಗು ತಿಹರು



    ಕೋರಿಕೆಗೂ ಬಗ್ಗದ ಜನ

    ರೋಡಿನಲ್ಲಿ ಬಿದ್ದು

    ನಶಿಸಿಹೋಗುತಿಹರು



    ಕೊರೋನ

    ರೋಷಾವೇಷ

    ನಂಬದ ರೀತಿ ಹೊಕ್ಕಿದೆ



    ಕೊರೋನ

    ರೋಗದಿಂದ ಮುಕ್ತಿಗೆ

    ನಡು ಬೀದಿಗೆ ಬರಬಾರದು



    ಕೊಬ್ಬು ಬಿಟ್ಟು

    ರೋಗ ಕಂಜಿ ಮನೆಯಲ್ಲಿದ್ದರೆ

    ನಮ್ಮ ನಾವು ಉಳಿಸಬಹುದು



    ಕೊರೋನ

    ರೋಗದಿಂದ

    ನಾವು ಮುಕ್ತ ಮುಕ್ತ ಎಂದು

    ಸಾರಬಹುದು.



    ಆಗಬಹುದು ಎಲ್ಲರೂ ಒಮ್ಮೆ

    ಶಿಸ್ತಿನ ಸಿಪಾಯಿ

    ತೋರಬಹುದು ಸರ್ವೇಜನ ಸುಖಿನೋ ಭವ

    ಭಾರತವು ಎಂದು.

    ReplyDelete
  17. ರಾಜೇಶ್ವರಿ. ಹುಲ್ಲೇನಹಳ್ಳಿ.

    ಪ್ರಭಾವ
    *********
    ಸಮಯವೇ ಇಲ್ಲವೆಂದು
    ಸದಾ ಕೊರಗುತ್ತಿದ್ದ ಜನರಿಗೀಗ,
    ಕಳೆಯಲಾಗುತ್ತಿಲ್ಲ ಸಮಯ
    ಕೊರೊನಾ ನೀ ಬಂದಿರುವಾಗ!

    ReplyDelete
  18. ಪಾಡು
    *****
    ಕುಡಿವ ಗಂಡಸರೆಲ್ಲರಲೂ ಇಂದು
    ಎಲ್ಲಿಲ್ಲದ ಸಡಗರ ಸಂಭ್ರಮ ಕಾತರ
    ನಾಳೆ ಎಣ್ಣೆ ಅಂಗಡಿ ಬಾಗಿಲು ತೆಗೀತಾರೆ ಎಂದು!
    ಅದೆಷ್ಟು ಜನ ನಡುರಾತ್ರಿಯಲೇ ಎದ್ದುಬಿಡುವರೂ
    ಕ್ಯೂ ನಿಲ್ಲಲೆಂದು!
    ತತರೆಯದಿದ್ದರೆ ಬಾಗಿಲು ಅವರ ಪಾಡು ,
    ಹೆಂಗಿರತೈತಿ ನೋಡು!

    ರಾಜೇಶ್ವರಿ. ಹುಲ್ಲೇನಹಳ್ಳಿ.

    ReplyDelete
  19. ಸಾಕಿನ್ನು ಆಟ
    **********
    ಹೇ ಕೊರೊನಾ ಇದೇ ನಿನ್ನ ಕೊಡುಗೇನಾ?
    ಜೀವಗಳ ಕಬಳಿಸಿದೆ,ಅಹಮಿಕೆಯ ಕಳಚಿದೆ.
    ಬಾಂಧವ್ಯಗಳ ಬೆಸೆದೆ, ಮನೆಯ ಮನೆಯಾಗಿಸಿದೆ.
    ಸಾಕಿನ್ನು ನಿನಾ ಆಟ,ನೀ ಕಲಿಸಿದ ಪಾಠ!
    ಹೇಳಿಬಿಡು ಬೇಗ ಟಾ ಟಾ.!

    ರಾಜೇಶ್ವರಿ. ಹುಲ್ಲೇನಹಳ್ಳಿ.

    ReplyDelete
  20. ಗುಮ್ಮ
    ****
    ಹೇ ಕೊರೊನಾ ಏನೆಂದು ಕರೆಯಲಿ ನಾ ನಿನ್ನ?
    ಅರೆಛಣದಿ ಮುಚ್ಚಿಬಿಟ್ಟೆಯಲ್ಲಾ
    ಮದುವೆಯಾದಾಗಿನಿಂದ ಮುಚ್ಚಿಸಲಾಗದ
    ನನ್ನವಳ ಈ ಬಾಯನ್ನ!

    ರಾಜೇಶ್ವರಿ. ಹುಲ್ಲೇನಹಳ್ಳಿ.

    ReplyDelete
  21. ಬಾಯಿಬೀಗ
    ********
    ದೇವರಿಗೆ ಹರಕೆ ಹೊತ್ತು
    ಹಾಕಿಸಿಕೊಳ್ಳುತ್ತಿದ್ದರು "ಬಾಯಿಬೀಗ "
    ಜಾತ್ರೆ ಪರಿಷೆ ನಡೆಯುವಾಗ!
    ಹಾಕಿಬಿಟ್ಟೆಯಾ ಕೊರೊನಾ ಸದ್ದಿಲ್ಲದೆ
    ನೀನೀಗ ಎಲ್ಲರ ಬಾಯಿಗೆ ಬೀಗ!

    ರಾಜೇಶ್ವರಿ. ಹುಲ್ಲೇನಹಳ್ಳಿ.

    ReplyDelete
  22. ಕೊರೊನಾ
    *******
    ಮನುಜನ ಅಹಮಿಗೆ,
    ಇದ್ದಕ್ಕಿದ್ದಂತೆ ದೈವ ಕೊಟ್ಟ ಪೆಟ್ಟು.
    ಗೋಜಲಿನ್ನೂ ಅದರ ಹುಟ್ಟಿನ ಗುಟ್ಟು!
    ಛಣ ಛಣಕೂ ಏರುತಿದೆ ಸಹಸ್ರ ಪಟ್ಟು!

    ರಾಜೇಶ್ವರಿ. ಹುಲ್ಲೇನಹಳ್ಳಿ.

    ReplyDelete
  23. ಗುಮ್ಮ
    ****
    ಹೇ ಕೊರೊನಾ ಏನೆಂದು ಕರೆಯಲಿ ನಾ ನಿನ್ನ?
    ಅರೆಛಣದಿ ಮುಚ್ಚಿಬಿಟ್ಟೆಯಲ್ಲಾ
    ಮದುವೆಯಾದಾಗಿನಿಂದ ಮುಚ್ಚಿಸಲಾಗದ
    ನನ್ನವಳ ಈ ಬಾಯನ್ನ!

    ರಾಜೇಶ್ವರಿ. ಹುಲ್ಲೇನಹಳ್ಳಿ.

    ReplyDelete