Monday, March 23, 2020

ಕರೋನ ...


ಕರೋನ ...

ಕರೋನಾ ಯುದ್ದ ಸಾರಿದೆ ನನಗೂ ಸಿಪಾಯಿ ಆಗುವ ಭಾಗ್ಯಒದಗಿದೆ -: ಗೆ ಬಂದ ಟಿಪ್ಪಣಿಯಲ್ಲಿ ಮೂಡಿದ ಕವನ

 

ಹಿಗ್ಗಿ ಹಿರಿಯುತ್ತಿದ್ದ ಮನುಷ್ಯನ ಅಹಂಕಾರವನ್ನ.

ಉಸಿರುಗಟ್ಟಿಸಿ.. ಹೆಡೆಮುರಿ ಕಟ್ಟಿದೆ ಕರೋನಾ..

ಜಗದಗಲ ಚಾಚಿ , ವಿಜೃಂಭಿಸುತ್ತಿದೆ ತನ್ನ ಕಬಂಧ ಬಾಹು ವನ್ನ ...

ತನ್ನೆದುರು ಮಂಡಿಯೂರಿಸಿದೇ ಇಡೀ ಭೂ ಮಂಡಲವನ್ನ..

ಸಾವಿಲ್ಲದ ಅಸುರನಂತೆ ಧರೆಯಲ್ಲಿ ಮೆರೆಯುತ್ತಿದೆ ಕರೋನ ..

ಬನ್ನಿ ಇದರ ಸಂಹಾರಕ್ಕೆ ನಾವೆಲ್ಲಾ ಕಂಕಣ ಬದ್ಧರಾಗಿ ಹೊರಡೋಣ..



ಕೈ ಕುಲುಕದೆ ಕೈ ಮುಗಿಯೋಣ..

ವ್ಯರ್ಥ ಪ್ರಯಾಣ ಮಾಡದಿರೋಣ..

ಅಸಡ್ಡೆ ಮಾತುಗಳಿಗಾಗಿ ಗುಂಪು ಗುಂಪಾಗಿ ನಿಲ್ಲದಿರೋಣ..

ಕರವಸ್ತ್ರ ಮುಕಗವಿಸು ಉಪಯೋಗಿಸಿ ,,ಜೀವನದ ಸರ್ವಸ್ವ ಕಾಪಡೋಣ...

ಸ್ವಚ್ಚ ಶುಭ್ರ ಜೀವನ ನಮ್ಮದಾಗಿಸಿ ಕೊಳ್ಳೋಣ...



ನಮ್ಮ ಸಂಸ್ಕೃತಿ ಪಾಲಿಸೋಣ ...



ನಮ್ಮ ನಮ್ಮ ಮನೆಯಲ್ಲಿ ದ್ದೇ....ನಾವು ಹೊರಡೋಣ

ಅವರಿಂದ ಇವರಿಂದ ಎನ್ನದೆ ನನ್ನಿಂದ ಇತರರಿಗೆ ಹರಡದೆ ಮಾದರಿಯಾಗೋಣ ...

ಕರೋನ ವಿರುದ್ಧ ದ ಯುದ್ಧದಲ್ಲಿ ..ನಾವು ಶಾಂತ ಸಿಪಾಯಿಗಳಾಗೋಣ..

-ಸಂತು S ಕೊಟಗಿ

No comments:

Post a Comment