"ಕರೋನಾ ಯಾ ಮರೋನಾ"
ಕರೋನಾ ಯುದ್ದ ಸಾರಿದೆ ನನಗೂ ಸಿಪಾಯಿ ಆಗುವ ಭಾಗ್ಯಒದಗಿದೆ -: ಗೆ ಬಂದ ಟಿಪ್ಪಣಿಯಲ್ಲಿ ಮೂಡಿದ ಕವನ
ಅಂದು ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮ ಗಾಂಧೀಜಿ ಹೇಳಿದರು "ಕರೋನಾ ಯಾ ಮರೋನಾ"
ವಿದಿಯಾಟ!ಇಂದು ನಾವು ಹೇಳಬೇಕಾಗಿದೆ 'ಕರೋನಾ ಇಂದ ಮರಣ'
"ಗೋ ಕರೋನಾ ಗೋ" ಎಂದರೆ ಕರೋನಾ ಹೋಗುತ್ತಾ?
ದೇವರೇ ಈ ಮಹಾಮಾರಿಯಿಂದ ನಮ್ಮನ್ನು ರಕ್ಷಿಸು ಎನ್ನುವುದು ನಿಮ್ಮ ಭಕ್ತಿ,ನಂಬಿಕೆಯಾದರೆ ಅದು ಕೂಡಾ ಅವರ ನಂಬಿಕೆಯಲ್ಲವೇ?
ಕಲಿಯುಗದಲ್ಲಿ ವಿಷ್ಣುವಿನ ಇನ್ನೋಂದು ಮುಖ ನೋಡುವ ಕಾಲ ಬಂದಿದೆ
ಆದರೆ ನಮ್ಮವರ ಮರಣಮೃದಂಗ ನೋಡಲಾಗುತ್ತಿಲ್ಲ ಎನಗೆ
ಮಾಡಬೇಕಾಗಿದೆ ವ್ಯಯಕ್ತಿಕ ಹೋರಾಟ ನಮಗಾಗಿ
ಮನುಕುಲದ ಪರಿಸರ ನಾಶವನ್ನು ನೋಡಲಾಗದೇ
ದೇವರೇ ಕಳಿಸಿದಂತಿದೆ ಈ ಕರೋನಾ
ಹೋರಾಡಬೇಕಾಗಿದೇ ಮನುಕುಲದ ಉಳಿವಿಗಾಗಿ
ಮಹಾಮಾರಿಯ ಅಳಿವಿಗಾಗಿಅಳಿವಿಗಾಗಿ
ಶಿಸ್ತಿನ ಸಿಪಾಯಿಗಳಾಗಿ ಕರೋನಾವನ್ನು ಹಿಮ್ಮೆಟ್ಟಿಸೋಣ
ಒಂದಾಗಿ ನನ್ನೊಂದಿಗೆ ನಿಮ್ಮ ರಕ್ಷಣೆಗಾಗಿ
-ಬಸವರಾಜ್ ಪಿ.
No comments:
Post a Comment