ಇಳೆಯ ಮಕ್ಕಳೆಲ್ಲ ಹೊರಡಿ
ಕರೋನಾ ಯುದ್ದ ಸಾರಿದೆ ನನಗೂ ಸಿಪಾಯಿ ಆಗುವ ಭಾಗ್ಯಒದಗಿದೆ -: ಗೆ ಬಂದ ಟಿಪ್ಪಣಿಯಲ್ಲಿ ಮೂಡಿದ ಕವನ
ಇಳೆಯ ಮಕ್ಕಳೆಲ್ಲ ಹೊರಡಿ
ಹಳೆಯ ಶಸ್ರ್ತವನ್ನು ಹಿಡಿದು
ಕರೋನ ರಕ್ಕಸನ ಹೂಂಕಾರ ಹೊಸಕಿ ಹಾಕುವ
ಯೋಧರೇ ಕೈಯ ಕುಲುಕಬೇಡಿ ನೀವು
ಕೈಯ ಮುಗಿದು ನಗುವ ಸೂಸಿ
ಇದುವೆ ಹಳೆಯ ಅಸ್ತ್ರ ನಮಗೆ ಯುದ್ಧ ಗೆಲ್ಲಲು
ಅಲ್ಲಿ ಇಲ್ಲಿ ಮುಟ್ಟಿಕೊಂಡು ಕ್ರಿಮಿಗಳನ್ನು ಬೆಳೆಸಬೇಡಿ
ಸಿಕ್ಕ ಸಿಕ್ಕ ಕಡೆಗಳಲ್ಲಿ ಅಲೆದು ತಿರುಗಿ ಸೊರಗಬೇಡಿ
ಮನೆಯೊಳಗೆ ಇದ್ದುಕೊಂಡು ಶಕ್ತಿ ಬೆಸೆಯುವ
ಕೈಯ ಶುಭ್ರ ತೊಳೆದುಕೊಂಡು
ಬಟ್ಟೆ ಬರೆಯ ಬಿಸಿಲಿಗಿಟ್ಟು
ಮೈಯ ತುಂಬ ಸ್ವಚ್ಛ ಶುದ್ಧ ಯುದ್ಧ ಜಯಿಸಲು
ಅನ್ನ ಹಾಲು ನೀರು ಸಾರು
ಏನ ತಿನ್ನು ಏನೊ ಕುಡಿಯೊ
ಕೈಯು ಸ್ವಚ್ಛ ಶುಭ್ರವಿರಲಿ ಯುದ್ಧ ಗೆಲ್ಲಲು
ಮನಸು ತುಂಬ ಜಯದ ತುಮುಲ
ಉಳಿದ ವಿಷಯ ಮಾರುದೂರ
ಜಯದ ಕೇಕೆ ಮುಗಿಲ ಬಗೆದು ನಭವ ಮುಟ್ಟಲಿ
-- ಶಾಮಣ್ಣ ಖಂಡಿಗೆ
No comments:
Post a Comment